PRAJA PARVA KANNADA DAILY MORNING

ಕಿತಾಪತಿ ಮಾಡಿದ್ದು ಬಿಜೆಪಿ ಸರಕಾರ, ಹೊಣೆ ಹೊರಿಸಿದ್ದು ಸಿಎಂ ಮೇಲೆ: ವೆಂಕಟೇಶ್ ಹೆಗಡೆ ಆರೋಪ

18th August 2024

News image

ಬಳ್ಳಾರಿ:ಮುಖ್ಯಮಂತ್ರಿರವರ ಪತ್ನಿ ಭೂಮಿ ಕಿತ್ತುಕೊಂಡಿದ್ದು ಬಿಜೆಪಿ ಸರ್ಕಾರ, ಅದನ್ನು ನಿವೇಶನ ಮಾಡಿ ಹಂಚಿಕೆ ಮಾಡಿದ್ದು ಬಿಜೆಪಿ ಸರ್ಕಾರ, ಪರ್ಯಾಯ ನಿವೇಶನ ಕೊಟ್ಟಿದ್ದು ಬಿಜೆಪಿ ಸರ್ಕಾರ, ಕಿತಾಪತಿ ಮಾಡಿದ್ದೆಲ್ಲಾ ಬಿಜೆಪಿ, ಆದರೆ, ಹೊಣೆ ಹೊರಿಸುವುದು ಇಂದಿನ ಮುಖ್ಯಮಂತ್ರಿ ಮೇಲೆ! ಇದೆಂತಹ ವಿಪರ್ಯಾಸ ಅಲ್ಲವೇ. ಇದು ಸದ್ಯ ರಾಜ್ಯದಲ್ಲಿ ಬಿಜೆಪಿ ನಡೆದುಕೊಳ್ಳುತ್ತಿರುವ ರೀತಿ. ಹರಿಯಾಣ, ಜಮ್ಮು ಕಾಶ್ಮೀರ ಸೇರಿದಂತೆ ನಾಲ್ಕು ರಾಜ್ಯಗಳ ಚುನಾವಣೆ ನಿನ್ನೆಯಷ್ಟೇ ಘೋಷಣೆ ಆಗಿದೆ.

ಇದರ ಬೆನ್ನಲ್ಲೇ ಇಂದು ಪ್ರಾಸಿಕ್ಯೂಷನ್ ಗೆ ರಾಜ್ಯಪಾಲ ಅನುಮತಿ ನೀಡಿರುವುದು ಬಿಜೆಪಿಯ ಹೀನ ರಾಜಕೀಯ ಪಟ್ಟುಗಳನ್ನು ತೋರುತ್ತದೆ ಎಂದು ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರರು ವೆಂಕಟೇಶ್ ಹೆಗಡೆ ಬಳ್ಳಾರಿ ಆಗ್ರಹಿಸಿದರು. ಸಮಾಜವಾದದ ಮೂಲಕ ರಾಜಕೀಯಕ್ಕೆ ಬಂದ ಸಿದ್ದರಾಮಯ್ಯ ಬಡವರ ಪರ ಎಂಬುದನ್ನು ತೋರಿದ್ದಾರೆ. ಭ್ರಷ್ಟ ಮುಕ್ತ ಆಡಳಿತ ನೀಡಿದ್ದಾರೆ. ಇದೆ ಮುಖ್ಯಮಂತ್ರಿಯ ಸಾಧನೆ ಮುಂದಿನ ನಾಲ್ಕು ರಾಜ್ಯಗಳ ಚುನಾವಣೆ ವಿಷಯ ವಸ್ತು ಆಗಲಿದೆ ಎಂದರು.


ಮಾದರಿ ಕರ್ನಾಟಕ ಸರ್ಕಾರದ ಉದಾಹರಣೆ ಕೊಟ್ಟು ಚುನಾವಣೆ ಎದುರಿಸಿದ್ದೆ ಅದಲ್ಲಿ ನಮ್ಮ ಸೋಲು ಖಚಿತ ಎಂದು ಅರಿತ ಕುಯುಕ್ತಿ ಬಿಜೆಪಿ ನಾಯಕರು ಇಂದು ರಾಜ್ಯಪಾಲರ ಮೂಲಕ ತನಿಖೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದು ಸೇಡಿನ ರಾಜಕಾರಣ ಅಲ್ಲದೆ ಬೇರೆ ಏನೂ ಅಲ್ಲ ಸಿದ್ದರಾಮಯ್ಯ ರಾಷ್ಟ್ರಮಟ್ಟದಲ್ಲಿ ಹೆಸರು ವಾಸಿ ಆಗಿದ್ದಾರೆ. ದೆಹಲಿಯಲ್ಲಿ ಎಎಪಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳುಹಿಸಿದರು. ಇದೀಗ 40 ವರ್ಷ ರಾಜಕಾರಣದಲ್ಲಿ ಇದ್ದರೂ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ರಾಜರಕಾರಣ ಮಾಡಿ ಕೊಂಡು ಬಂದ ಒಬ್ಬ ದಕ್ಷ, ಪ್ರಾಮಾಣಿಕ ರಾಜಕಾರಣ ಮಾಡಿಕೊಂಡು ಬಂದವರು.

Comments
Show comments
ಸಂಬಂಧಿತ ಲೇಖನಗಳು
ಸುದಿನ
11th March 2025

ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ.  ಮುಸಲ್ಮಾರಿ  ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ. 

ಸುದಿನ
11th March 2025

ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ.  ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.

ಸುದಿನ
3rd March 2025

ಕುಡಿವ ನೀರಿಗಾಗಿ ರಹವಾಸಿಗಳಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಾವಲಗಟ್ಟಿ ಗೆ ಮನವಿ

ಮಲ್ಲಮ್ಮ ನುಡಿ ವಾರ್ತೆ
2nd March 2025

ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ‍್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ

ಮಲ್ಲಮ್ಮ ನುಡಿ ವಾರ್ತೆ
1st March 2025

ರಾಜ್ಯದ ಅಭಿವೃದ್ಧಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ-ಸಚಿವ ಈಶ್ವರ ಖಂಡ್ರೆ

ಮಲ್ಲಮ್ಮ ನುಡಿ ವಾರ್ತೆ
23rd February 2025

'ನೀರು, ಮಣ್ಣು ದೇವರು ಕೊಟ್ಟ ಕಾಣಿಕೆ ಅದು ಸಂರಕ್ಷಣೆ ಮಾಡಬೇಕು' ಶಿವಶೇಖರ ಸ್ವಾಮಿ ಜಲಾನಯನ ಯಾತ್ರೆ

ಪ್ರಕಾಶಕರು
Aslam Basha